Skip to main content

ಅದ್ಯಾತ್ಮದಿಂದ ಜೀವನ ಸರಳ: ಶಿರಹಟ್ಟಿ




ಸ್ಫೂರ್ತಿ ನ್ಯೂಸ್ ಚಡಚಣ 

ಭ್ಹ್ರಮ ಕುಮಾರಿ ಈಶ್ವರೀಯ ಮಹಾವಿದ್ಯಾಲಯ ನೀಡುವ ಆಧ್ಯಾತ್ಮ ಜ್ಞಾನವನ್ನು ಜೀವನದಲ್ಲಿ ಅಳವಡಸಿಕೊಂಡರೆ ಜೀವನ ಸರಳ ಮತ್ತು ಅರ್ಥಪೂರ್ಣವಾಗುವದು ಎಂದು ಚಡಚಣ ತಹಶೀಲದಾರ ಹಣಮಂತ ಶಿರಹಟ್ಟಿ ಹೇಳಿದರು.

ಚಡಚಣ ಪಟ್ಟಣದ ಈಶ್ವರಿ ಕೇಂದ್ರದ ಶ್ರೀದೇವಿ ಅಕ್ಕನವರು ನವರಾತ್ರಿಯಿಂದ ನಡೆಸಿದ 21 ಮೌನ ಅನುಷ್ಟಾನದ ಮುಕ್ತಾಯ ಸಮಾರಂಭದಲ್ಲಿ ಅತಿಥಿಗಳಾಗಿ  ಅವರು ಮಾತನಾಡಿದರು.

ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಂಭಂದಗಳನ್ನು ಶಾಂತ ಮನಸ್ಸಿನೊಂದಿಗೆ ನೀಭಾಯಿಸುವದನ್ನು ಓ ಶಾಂತಿ ಕೇಂದ್ರಗಳು ಬಹಳ ಸರಳವಾಗಿ ಕಲಿಸುತ್ತವೆ. ಆದ್ಯಾತ್ಮ ಬರಿ ವಯಸ್ಸಾದವರಿಗೆ ಎನ್ನವು ತಪ್ಪು ಕಲ್ಪನೆ ಜನರಲ್ಲಿದ್ದು ಎಲ್ಲರೂ ಆದ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು. 

ಪ್ರಾಚರ್ಯ ಎಂ.ವಿ.ಕಟಗೇರಿ ಇವರನ್ನು ಓಶಾಂತಿ ಕೇಂದ್ರದಿಂದ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ಇಂಡಿ ಓ ಶಾಂತಿ ಕೇಂದ್ರದ ಯಮುನಾಜಿ ಅಕ್ಕನವರು ಮತ್ತು ಚಡಚಣ ಕೇಂದ್ರದ ಶ್ರೀದೇವಿ ಅಕ್ಕನವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಕೇಂದ್ರದ ಸ್ವಯಂಸೇವಕರಾದ ಮಲ್ಲಿನಾಥ ವನಕುದುರೆ, ಎಸ್.ಎನ್ ಸಾಲೋಟಗಿ, ಮಹೇಶ ಕೇಶಟ್ಟಿ, ಎಂ.ಆರ್ ಹಿಟ್ನಳ್ಳಿ, ರಾಜು ಸರಸಂಬಿ, ಅವಟಿ ಸರ್, ಸೇರಿದಂತೆ ನೂರಾರು ಉಪಸ್ಥಿತರಿದ್ದರು.

Comments

Popular posts from this blog

ರಮೇಶ ನಾಯಕ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

ಸ್ಫೂರ್ತಿ ನ್ಯೂಸ್ಚ ಚಡಚಣ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ವಿಶ್ವ ಕನ್ನಡ ಬಳಗಬಾವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ  ಗ್ರಾಮದ ಭೀಮಾಶಂಕರಲಿಂಗ ಪ್ರೌಢಶಾಲೆ ಮುಖ್ಯ ಶಿಕ್ಷಕ  ರಮೇಶ  ನಾಯಕ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವಂಬರ್ 1 ರಂದು ಹುಬ್ಬಳ್ಳಿಯ ಜಯಚಾಮರಾಜ ನಗರದ ಮಹಿಳಾ ಕಾಲೇಜು ಎದುರಿಗೆ ಅಕ್ಕನ ಬಳಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಮೇಶ ನಾಯಕ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ ಎಸ್ ಕಾಂಬಳೆ ವಿಜಯಪುರ ಹಾಗೂ ಚಡಚಣ ತಾಲೂಕ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.