Skip to main content

Posts

Showing posts from October, 2022

ರಮೇಶ ನಾಯಕ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

ಸ್ಫೂರ್ತಿ ನ್ಯೂಸ್ಚ ಚಡಚಣ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ವಿಶ್ವ ಕನ್ನಡ ಬಳಗಬಾವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ  ಗ್ರಾಮದ ಭೀಮಾಶಂಕರಲಿಂಗ ಪ್ರೌಢಶಾಲೆ ಮುಖ್ಯ ಶಿಕ್ಷಕ  ರಮೇಶ  ನಾಯಕ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವಂಬರ್ 1 ರಂದು ಹುಬ್ಬಳ್ಳಿಯ ಜಯಚಾಮರಾಜ ನಗರದ ಮಹಿಳಾ ಕಾಲೇಜು ಎದುರಿಗೆ ಅಕ್ಕನ ಬಳಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಮೇಶ ನಾಯಕ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ ಎಸ್ ಕಾಂಬಳೆ ವಿಜಯಪುರ ಹಾಗೂ ಚಡಚಣ ತಾಲೂಕ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಪಾಲಿಕೆ ಚುನಾವಣೆ: ಶೇ.55.25 ರಷ್ಟು ಮತದಾನ

  ಸ್ಫೂರ್ತಿ ನ್ಯೂಸ್ ವಿಜಯಪುರ  ನಗರದ 35 ವಾರ್ಡ್ ಗಳ ಪೈಕಿ ಒಟ್ಟು 2,87,927 ಮತದಾರರಿದ್ದು, 82,046 ಪುರುಷರು, 77,024 ಮಹಿಳೆಯರು ಸೇರಿದಂತೆ ಒಟ್ಟು 1,59,070 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ. 55.25 ರಷ್ಟು ಮತದಾನವಾಗಿದೆ.

ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿಗೆ ಮಲ್ಲಿಕಾರ್ಜುನ ಕುಬಕಡ್ಡಿ ಆಯ್ಕೆ

    ಸ್ಫೂರ್ತಿ ನ್ಯೂಸ್ಕೊ ಕೊಲ್ಹಾರ  - ಕರ್ನಾಟಕ ಜನತಾ ಸೇನಾದಳ ತುಮಕೂರು ಜಿಲ್ಲಾ ಘಟಕ ಕೊಡಮಾಡುವ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿಯು ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ, ಪತ್ರಕರ್ತ, ಬರಹಗಾರ, ಯುವ ಸಾಹಿತಿ ಮಲ್ಲಿಕಾರ್ಜುನ ಕುಬಕಡ್ಡಿಯವರಿಗೆ ಲಭಿಸಿದೆ.  ಅಕ್ಟೋಬರ್ 30ರಂದು ಬೆಳಿಗ್ಗೆ 10: 30ಕ್ಕೆ ತುಮಕೂರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾ ಭವನದಲ್ಲಿ ಕರ್ನಾಟಕ ಜನತಾ ಸೇನಾ ದಳ ವತಿಯಿಂದ ನಡೆಯಲಿರುವ ಸ್ವಾಮಿ ವಿವೇಕಾನಂದ ಸರ್ವ ಧರ್ಮ ಸಮ್ಮಳನದ ಚಿಕ್ಯಾಗೋ ಭಾಷಣದ 129 ನೇ ವರ್ಷಾಚರಣೆಯ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೊಡಮಾಡಲಾಗುವದು ಎಂದು ಕರ್ನಾಟಕ ಜನತಾ ಸೇನಾ ದಳದ ರಾಜ್ಯಾಧ್ಯಕ್ಷ ಹೆಚ್ ಸದಾಶಿವ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಕೆ ಬಿ ಚಂದ್ರಚೂಡ ಪ್ರಕಟಣೆಗೆ ತಿಳಿಸಿದ್ದಾರೆ.   

ಹಾವಿನಾಳ: ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದೀಪನಕ್ಕೆ ಚಾಲನೆ

  ಸ್ಫೂರ್ತಿ ನ್ಯೂಸ್ಚ ಚಡಚಣ  ಸಮೀಫದ  ಹಾವಿನಾಳ ಗ್ರಾಮದ  ಶ್ರೀ. ದತ್ತ ಇಂಡಿಯಾ  ಕಂಪನಿಯ ಇಂಡಿಯನ್ ಶುಗರ್ ಸಕ್ಕರೆ  ಕಾರ್ಖಾನೆಯ  ಪ್ರಸಕ್ತ ಸಾಲಿನ ಕಬ್ಬು ನುರಿಸುವ ಬಾಯ್ಲರ್‌ ಪ್ರದೀಪನ ಕಾರ್ಯಕ್ರಮ ಸೋಮುವಾರ ಜರುಗಿತು ಬಾಯ್ಲರ್ ಪೂಜಾ ಕಾಯಕ್ರಮ ಹಾಗೂ ಪ್ರದೀಪನ ಕಾರ್ಯಕ್ರಮಕ್ಕೆ  ಕಂಪನಿಯ  ನಿರ್ದೇಶಕ ಚೇತನ್ ಧಾರು , ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ದತ್ತ ಸುಗರ್ಸ್‌ ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ,ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯ ಅ.31 ರಂದು ಆರಂಭಗೊಳ್ಳಲಿದೆ. ಕಾರ್ಖೆಯನು  7.50 ಲಕ್ಷ ಮೆ.ಟನ್ ಗುರಿ ಸಾಧಿಸಲು ರೈತರೊಂದಿಗೆ ಕಬ್ಬಿನ ನೋಂದಣಿ, ಕಬ್ಬು ಕಡೆಯುವ ಕೃಮಿಕರು ಹಾಗೂ , ಕಬ್ಬು ಸರಭರಾಜು ಮಾಡುವ  ವಾಹನಗಳ ಮಾಲಿಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಾರ್ಖಾನೆಯ ಯಂತ್ರೋಪಕರಣಗಳ  ದುರಸ್ತಿಯ ಕೆಲಸ ಪೂರ್ಣ ಪೂರ್ಣಗೊಂಡಿದ್ದು, ಕಬ್ಬು ನುರಿಸುವ ಕಾರ್ಯಕ್ಕೆ ಕ್ಷಣಗಣೆ ಆರಂಭವಾಗಿದ ಎಂದರು. ಕಾರ್ಖಾನೆಯ   ನಿರ್ದೇಶಕ ಚೇತನ್ ಧಾರು ಮಾತನಾಡಿ,ಕಬ್ಬು ಬೆಳೆಗಾರರು ,ಕಬ್ಬು ಕಟಾವುದಾರರು, ಸಾಗಾಣಿಕೆದಾರರು, ವ್ಯಾಪಾರಸ್ಥರು, ಹಾಗೂ ಹಿತೈಶಿಗಳು ಎಂದಿನಂತೆ ಸಕ್ಕೆರೆ ಕಾರ್ಖಾನೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸಹಕರಿಸಬೇಕು ಎಂದ ಅವರು, ಕಾರ್ಖಾನೆಯ ಎಲ್ಲ  ...

ಪಟ್ಟಣದ ಸರ್ವೋತೋಮುಖ ಅಭಿವೃದ್ಧಿಗೆ ಬದ್ಧ -ಶಾಸಕ ದೇವಾನಂದ

 ವಿವಿಧ ರಸ್ತೆ ಕಾಮಗಾರಿಗೆ ಚಾಲನೆ:ಕೆರೆಗೆ ಬಾಗೀನು ಅರ್ಪಣೆ ಸ್ಫೂರ್ತಿ ನ್ಯೂಸ್ ಚಡಚಣ. ರಾಜ್ಯದ ಗಡಿ ಅಂಚಿನಲ್ಲಿರುವ ಚಡಚಣ ಪಟ್ಟಣವನ್ನು ಸಿ ಸಿ ರಸ್ತೆ ಹಾಗೂ ಒಳಚರಂಡಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿ ಮಾಡುತ್ತಿರುವುದಾಗಿ ಎಂದು ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಭಾನುವಾರ ಸುಮಾರು 2 ಕೋಟಿ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾದ ಕಾಂಕ್ರೆಟ್‌ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಾವಿನಾಳದಲ್ಲಿ ಸುಮಾರು ಒಂದು ಕೋಟಿ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೇವಾಲಯಗಳ ಜಿರರ್ಣೋದ್ಧಾರ ಸೇರಿದಂತೆ ತಾಲ್ಲೂಕಿನ 38 ದೇವಾಲಯಗಳ ಜಿರ್ಣೋದ್ಧಾರಕ್ಕೆ ಚಾಲನೆ ನೀಡಿದ್ದು,ಸ್ಥಳಿಯ ವಿರಕ್ತ ಮಠಕ್ಕೆ 20 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ.ಚಡಚಣದಿಂದ ಉಮರಜ ಗ್ರಾಮದ ವರೆಗಿನ ರಸ್ತೆ ನಿರ್ಮಾಣಕ್ಕೆ 8 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ, ನಾಗಠಾಣ ಮತಕ್ಷೇತ್ರದ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 8 ಕೋಟಿ ಹಾಗೂ ಸಿ ಸಿ ರಸ್ತೆ ನಿರ್ನಾಣ,ಒಳ ಚರಂಡಿ ನಿರ್ಮಾಣಕ್ಕೆ 8 ಕೋಟಿ ಹಣ ಮಂಜೂರಾಗಿದೆ.ಕೆ.ಬಿ.ಜೆ.ಎನ್‌ ಎಲ್‌ ನಿಂದ ಕುಡಿಯುವ ನೀರು ಪುರೈಕೆ ಯೋಜನೆಗೆ 2 ಕೋಟಿ ಹಣ ಬಿಡುಗಡೆಯಾಗಿದ್ದು,ಮತಕ್ಷೇತ್ರದಲ್ಲಿ ಒಟ್ಟು 21 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಈ...

ನಿವರಗಿ: ಅಂತರ ರಾಜಮಟ್ಟದ ವಾಲಿಬಾಲ ಪಂದ್ಯಾವಳಿ.(ಟಿ ಬಾಲ್ ಡೈರೆಕ್ಟ್ ಪಾಸ್ )

ಸ್ಫೂರ್ತಿ ನ್ಯೂಸ್ ಚಡಚಣ. ತಾಲೂಕಿನ ನಿವರಗಿ ಗ್ರಾಮದಲ್ಲಿ ದೀಪಾವಳಿ ಹಾಗೂ ಹೆಸ್ಕಾಂ ಎ ಇ ದಿ. ಮಹಾದೇವ ರಜಪೂತ ಅವರ ಪುಣ್ಯಸ್ಮರಣೆ ನಿಮಿತ್ಯ ಆ.25 ರಂದು ಅಂತರ ರಾಜಮಟ್ಟದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ .  ಆ.26. ಸಾಯಂಕಾಲ 5 ಗಂಟೆಗೆ ಶ್ರಿ ಸಂಗಮೇಶ್ವರ ಲಕ್ಷ್ಮೀ ಬೇಟಿ ಜರುಗುವುದು ಮತ್ತು ಅದೇ ದಿನ ರಾತ್ರಿ 9.00 ಗಂಟೆಗೆ ಸ್ವ ಗ್ರಾಮಸ್ಥರಿಂದ ಅಭಿನಯಿಸಲ್ಪಡುವ 'ಮಗ ಹೋದರು ಮಾಂಗಲ್ಯ ಬೇಕು' ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಲಿಬಾಲ ಕ್ರೀಡಾ ತಂಡದವರು ಆಗಮಿಸಬೇಕೆಂದು ಸಮಿತಿ ಯವರು ಕೋರಿರುತ್ತಾರೆ.  

ಮಸೂತಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ

  ಸ್ಫೂರ್ತಿ ನ್ಯೂಸ್ ಕೊಲ್ಹಾರ :  ಮಸೂತಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಗಣಾಚಾರಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಬ್ರಿಟಿಷರನ್ನು ಎದುರಿಸಿದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಚನ್ನಮ್ಮ ಉತ್ತಮ ಆಡಳಿತಕ್ಕೆ  ಹೆಸರಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಕೆ ವಿ ಕುಲಕರ್ಣಿ, ಎಪಿಎಂಸಿ ನಿರ್ದೇಶಕರಾದ ಸಿ ಪಿ ಪಾಟೀಲ,ಹಿರಿಯರಾದ ಡಾ,ವಾಯ್ ಕೆ ಹೂಗಾರ, ಡಾ,ಬಿ ಎಸ್ ಸಂಧಿಮನಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು,ಅಪಾರ ಸಂಖ್ಯೆಯ ಸಮಾಜ ಭಾಂದವರು ಭಾಗವಹಿಸಿದ್ದರು.

ಪ್ರತಿ ಟನ್ ಕಬ್ಬಿನ ಬೆಲೆ 3500 ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಸ್ಫೂರ್ತಿ ನ್ಯೂಸ್ ಕೋಲಾರ :  ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಗೆ  3500 ರೂಪಾಯಿ ನೀಡುವಂತೆ ಆಗ್ರಹಿಸಿ ಬಾಗಲಕೋಟ ಹಾಗೂ ವಿಜಯಪುರ ಅವಳಿ ಜಿಲ್ಲೆಯ ರೈತರು ಪಟ್ಟಣದ ಯುಕೆಪಿ ಬಳಿ ರಾಷ್ಟ್ರೀಯ ಹೆದ್ದಾರಿ 218ನ್ನು ಕ್ಷಣ ಕಾಲ ಕಬ್ಬಿನ ಟ್ರ್ಯಾಕ್ಟರ್ ಸೇರಿದಂತೆ ಅನೇಕ ವಾಹನಗಳನ್ನು ತಡೆದು ಬಂದ ಮಾಡಿ ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವಳಿ ಜಿಲ್ಲೆಯ ರೈತರು ಭಾಗವಹಿಸಿದ್ದರು. ಸರ್ಕಾರ ಹಾಗೂ ಕಾರ್ಖಾನೆಗಳ ಮಾಲೀಕರ ವಿರುದ್ಧ ಘೋಷಣೆಯನ್ನು ಕೂಗಿದರು. ಈ ಸಂದರ್ಭದಲ್ಲಿ ಈರುಳ್ಳಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ಮಾತನಾಡಿ, ಪ್ರತಿ ಟನ್  ಕಬ್ಬಿಗೆ 3500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಇಂದು ನಾವು ರೈತರು ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳನ್ನು ತಡೆದು ಹಾಗೂ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡುವುದರ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.  ಅವಳಿ ಜಿಲ್ಲೆಯಲ್ಲಿ ಬರುವ ಕಬ್ಬಿಣ ಕಾರ್ಖಾನೆಗಳ ಮಾಲೀಕರು ನವಂಬರ್ 27ರಂದು ಕೊಲ್ಹಾರ ಪ್ರವಾಸಿ ಮಂದಿರದಲ್ಲಿ ನಡೆಯುವ ರೈತರ ಸಭೆಗೆ ಆಗಮಿಸಿ ಕಬ್ಬಿಗೆ ಪ್ರತಿ ಟನ್ ಗೆ ತಾವು ತಮ್ಮ ಕಾರ್ಖಾನೆ ವತಿಯಿಂದ ನೀಡುವ  ಕಬ್ಬಿನ ದರ ಪ್ರಕಟಿಸಬೇಕೆಂದು ಆಗ್ರಹಿಸಿದರು. ಈ ಸಂದರ...

ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ : ಶಾಸಕ ದೇವಾನಂದ

  ಸ್ಫೂರ್ತಿ ನ್ಯೂಸ್ ವಿಜಯಪುರ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಹೇಳಿದರು. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ಯ  ವಾರ್ಡ್ ನಂ.17 ರಲ್ಲಿ ಸ್ಪರ್ಧಿಸಿರುವ ಗೀತಾ ರಾಮತಳ ಹಾಗೂ ವಾರ್ಡ್ ನಂ.19 ರ ಅಭ್ಯರ್ಥಿ ಜಯಶ್ರೀ ಸಾಹುಕಾರ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮಾತಯಾಚಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಕೋಲಾರ ಪ. ಪಂ: ಸ್ವಚ್ಛತಾ ಕೀ ದೋ ರಂಗ ಆಚರಣೆ

 ಸ್ಫೂರ್ತಿ ನ್ಯೂಸ್  ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾದ ಸ್ವಚ್ಛತಾ ಕೀ ದೋ ರಂಗ ಕಾರ್ಯಕ್ರಮ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿಯವರ ನೇತೃತ್ವದಲ್ಲಿ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಗಳಲ್ಲಿ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನಾವು ಕೊಲ್ಹಾರ ಪಟ್ಟಣವನ್ನು ಹಸಿ ಕಸ(ಹರಾ ಗೀಲಾ ) ಹಾಗೂ ಒಣ ಕಸ (ಸುಖಾ ನೀಲಾ ) ಬೆರ್ಪಡಿಸಿ ಪಟ್ಟಣ ಪಂಚಾಯ್ತಿ ಗೆ ಸಹಕರಿಸಿದಾಗ ಮಾತ್ರ ಸ್ವಚ್ಚತೆ ಕಾಪಾಡಲು ಸಾಧ್ಯ ಎಂದ ಅವರು, ಇದರ ಕುರಿತು ಪ್ರತಿಯೊಬ್ಬರಿಗೂ ಕೂಡಾ ಅರಿವು ಮೂಡಿಸಬೇಕಾಗಿದೆ. ಇಂದಿನ ಮಕ್ಕಳೆ ನಾಳಿನ ನಾಡಿನ ನಾಗರೀಕರು ಹಾಗಾಗಿ ಕಲಿಯುವ ಹಂತದಲ್ಲಿ ನಿಮಗೆ ಸ್ವಚ್ಛತೆಯ ಬಗ್ಗೆ ತಿಳಿಸಿದರೆ ಮುಂದೆ ತಾವು ತಮ್ಮ ಮನೆಯಲ್ಲಿ ಕುಟುಂಬದವರಿಗೆ ಇದರ ಬಗ್ಗೆ ಅರಿವು ಮೂಡಿಸುವ ಮೂಲಕ ಎಲ್ಲರೂ ಜಾಗೃತರಾಗಿ ಮನೆ ಹಾಗೂ ಪರಿಸರ, ಪಟ್ಟಣವನ್ನು ಸ್ವಚ್ಚವಾಗಿಡಲು ಸಾಧ್ಯ ವಾಗುತ್ತದೆ ಎಂದರು. ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ ಮಾತನಾಡಿ, ಹಸಿ ಕಸ ಹಾಗೂ ವನ ಕಸದ ಬಗ್ಗೆ ಸಂಪೂರ್ಣ ಅರಿತುಕೊಂಡು ತಾವು ತಮ್ಮ ಪಾಲಕ ರಿಗೆ ತಿಳಿಸಿ ಕೊಲ್ಹಾರ ಪಟ್ಟಣವನ್ನು ಸ್ವಚ್ಚ ಪಟ್ಟಣವನ್ನಾಗಿ ಮಾಡಲು ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಮಂಜು ಚಿತ್ತರಗಿ, ಶಿಕ್ಷಕರಾದ ಎಸ್ ಎಸ್ ಉತ್ನಾಳ, ಪ್ರಕಾಶ ನಾಯಕ, ಸಿ ಎಚ್ ಗೌಡರ, ಆರ್ ಎಲ್ ನಂದಿ, ಪರು ಗಣಿ, ವಿ ಎಸ್ ಮಠ ಸೇ...

ರಸ್ತೆ ಅಪಘಾತ: ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ್ ಪಾರು.

  ಸ್ಫೂರ್ತಿ ನ್ಯೂಸ್ ಚಡಚಣ . ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ್(ಮನಗೂಳಿ) ಅವರ ಕಾರ್ ಹಾಗೂ ಹೈವಾ ನಡುವೆ ಕೊಲ್ಹಾರ ಸಮೀಪ ಅಪಘಾತ ಸಂಭವಿಸಿ ಸೋಮನಗೌಡ ಪಾಟೀಲ್ ಮನಗೂಳಿ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಣಾಪಾಯದಿಂದ ಪಾರಾಗಿದ್ದಾರೆ. ಮನಗೂಳಿ ಪಟ್ಟಣದಿಂದ ಕೊಲ್ಹಾರ ಕಡೆಗೆ ಕುಟುಂಬ ಸಮೇತ ಹೊರಟಿದ್ದ ಅಪ್ಪುಗೌಡ ಪಾಟೀಲ್ ಅವರ ಕಾರ್ ಹಾಗೂ ಬಸವನಬಾಗೇವಾಡಿ ಕಡೆಗೆ ಹೊರಟಿದ್ದ ಹೈವಾ ನಡುವೆ ತಾಲ್ಲೂಕಿನ ಮಟ್ಟಿಹಾಳ ಕ್ರಾಸ್ ಹತ್ತಿರ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸೋಮನಗೌಡರು ಹಾಗೂ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿದ ಎಂಟು ಬಂದಾರಗಳು ಬಂದ್

  ಸ್ಫೂರ್ತಿ ನ್ಯೂಸ್ ಚಡಚಣ  ತಾಲೂಕಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಎಂಟು ಬಂದಾರ ಕಾಮ್ ಬ್ರಿಡ್ಜ ಗಳು ಮುಳಗಡೆಯಾಗಿದ್ದು, ಕರ್ನಾಟಕ ಮಹಾರಾಷ್ಟ್ರ ಕಕ್ಕೆ ಅಂಪರ್ಕ ಸಂಪೂರ್ಣ ಕಟ್ಟಾಗಿದೆ 

ಭಾರತ ಜೋಡೊ ಪಾದಯಾತ್ರೆ ಯಶಸ್ವಿಗೊಳಿಸೋಣ : ಕಟಕದೊಂಡ

  ಸ್ಫೂರ್ತಿ ನ್ಯೂಸ್ ಚಡಚಣ. ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದ ವರೆಗೆ ಜರುಗಲಿರುವ ಭಾರತ ಜೋಡೊ ಯಾತ್ರೆಯಲ್ಲಿ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕತ್ರರು ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ಜೋಡೊ ಪಾದಯಾತ್ರೆಯ ಪೂರ್ವ ಭಾವಿ ಸಭೆಯಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ಸಾಮರಸ್ಯಕ್ಕೆ ಇರುವ ಸವಾಲುಗಳನ್ನು ಪರಿಗಣಿಸಿ, ರಾಜ್ಯ ಶಾಂತಿಯ ತೋಟವಾಗಬೇಕು, ಇಂದು ಪ್ರತಿ ಕುಟುಂಬದಲ್ಲಿ ಹಣದುಬ್ಬರ ನಿರುದ್ಯೋಗ ಸಮಸ್ಯೆಗಳಿಂದ ಜನ ಬಳಲಿ ಹೋಗಿದ್ದಾರೆ. ಯುವಕರಿಗೆ ಉದ್ಯೋಗ ಸಿಗಬೇಕು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು, ರೈತರು ಮತ್ತು ಕೂಲಿಕಾರ್ಮಿಕರ ಬದುಕನ್ನು ಸುಲಭಗೊಳಿಸಬೇಕು ಎಂಬುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಚಡಚಣ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಆರ್.ಡಿ.ಹಕ್ಕೆ, ಕಾಂಗ್ರೆಸ್ ಹಿರಿಯ ಮುಖಂಡ  ಡಿ.ಎಲ್.ಚವ್ಹಾಣ,  ಕಿಸಾನ ಘಟಕದ ರಾಜ್ಯ  ಪ್ರಧಾನ  ಕಾರ್ಯದರ್ಶಿ ಸಂತೋಷ ಪಾಟೀಲ, DCC ಸದಸ್ಯ ರವಿ ಬಿರಾದಾರ, ಕುತುಬುದ್ದಿನ ಪಟೇಲ,ಶಿವ ಪಾಂಡ್ರೆ,  ಸೂರಜಗೌಡ ಪಾಟೀಲ,  ಮಹಾಂತೇಶ ಗುಡ್ಡದ, ಬ್ಲಾಕ್ ಸಮಿತಿಯ ಉಪಾಧ್ಯಕ್ಷ ರಾಜು ಸಿಂಗೆ, ಕಲ್ಲಪ್ಪ ಕನಮಡಿ,  ಪ್ರಧಾನ ಕಾರ್ಯದರ್ಶಿ ಸತೀಶ ಉಟಗಿ, ಶ್ರೀಶೈಲ ಕೋಳಿ, ಖಜಾಂ...

ಖಾಸಗಿ ಶಾಲಾ ಶಿಕ್ಷಕನ ಕಥೆ: ಬಿಕಾಂ ಪಠ್ಯಕ್ರಮಕ್ಕೆ ಆಯ್ಕೆ ಹರ್ಷ ವ್ಯಕ್ತಪಡಿಸಿದ ಖಾಸಗಿ ಶಾಲೆಗಳ ಒಕ್ಕೂಟ

  ಸ್ಫೂರ್ತಿ ನ್ಯೂಸ್ ಚಡಚಣ. ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಹಾಗೂ ಲೇಖಕ ಎಮ್ ಕೆ ಶೇಖ ಅವರ "ನೂಲು" ಎಂಬ ಕಥಾ ಸಂಕಲನದ "ಮನುಷತ್ವದೆಡೆಗೆ ಆವ್ಹಾನ " ಎಂಬ ಕಥೆಯು ವಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವಾವಿದ್ಯಾಲಯದ ಬಿ. ಕಾಮ್ ಮೂರನೇ ಸೆಮಿಸ್ಟರ್ ಪಠ್ಯಕ್ರಮಕ್ಕೆ ಆಯ್ಕೆ ಮಾಡಿ ಆದೇಶ ಹೋರಾಡಿಸಿರುವುದು ಚಡಚಣ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್ ಎಸ್ ಹಾವಿನಾಳ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಶಿಕ್ಷಕನ ಸಾಧನೆಗೆ ಸಾಹಿತಿ ಬಸವರಾಜ ಯಂಕಂಚಿ, ತಾಲೂಕು ಗೌರವಾಧ್ಯಕ್ಷ ಸಿದ್ದಣಸಾಹುಕಾರ ಬಿರಾದಾರ, ರುಪ್ಸ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಮೇಶ ಜಿತ್ತಿ, ಕಾರ್ಯದರ್ಶಿ ಕೆ ಪಿ ಬೋಳೆಗಾಂವ, ತಾಲೂಕು ಅಧ್ಯಕ್ಷ ರವಿ ಬಿರಾದಾರ, ಉಪಾಧ್ಯಕ್ಷ ಅಬ್ದುಲಗನಿ ಸೌಧಿ, ಕಾರ್ಯದರ್ಶಿ ಎ ಬಿ ಪಾಟೀಲ, ನಿರ್ದೇಶಕರಾದ ಪೊದ್ದಾರ, ಮೋಹನ ಚೋಳಖೆ,ಜೋಶೆಪ,ರೇವಣಸಿದ್ಧ ಪೂಜಾರಿ,ರಾಜು ವಾಲಿ,ಪ್ರವೀಣ ನಾಯ್ಕೋಡಿ, ಪಿಂಟು ಹಾವಿನಾಳ,ಸಿದ್ದು ತೇಲಿ, ಲಚ್ಯಾಣ ಸರ್,ಅಮಸಿದ್ದ ಭೈರಗೊಂಡ, ಎ ಕೆ ಚಡಚಣ,ಸಂಗು ತುಪ್ಪದ, ನಾರಾಯಣ ಸರ್ಸೇರಿದಂತೆ ತಾಲೂಕು ಖಾಸಗಿ ಶಿಕ್ಷಕ ಸಮೂಹ ಹರ್ಷ ವ್ಯಕ್ತಪಡಿದೆ. .

ಅದ್ಯಾತ್ಮದಿಂದ ಜೀವನ ಸರಳ: ಶಿರಹಟ್ಟಿ

ಸ್ಫೂರ್ತಿ ನ್ಯೂಸ್ ಚಡಚಣ  ಭ್ಹ್ರಮ ಕುಮಾರಿ ಈಶ್ವರೀಯ ಮಹಾವಿದ್ಯಾಲಯ ನೀಡುವ ಆಧ್ಯಾತ್ಮ ಜ್ಞಾನವನ್ನು ಜೀವನದಲ್ಲಿ ಅಳವಡಸಿಕೊಂಡರೆ ಜೀವನ ಸರಳ ಮತ್ತು ಅರ್ಥಪೂರ್ಣವಾಗುವದು ಎಂದು ಚಡಚಣ ತಹಶೀಲದಾರ ಹಣಮಂತ ಶಿರಹಟ್ಟಿ ಹೇಳಿದರು. ಚಡಚಣ ಪಟ್ಟಣದ ಈಶ್ವರಿ ಕೇಂದ್ರದ ಶ್ರೀದೇವಿ ಅಕ್ಕನವರು ನವರಾತ್ರಿಯಿಂದ ನಡೆಸಿದ 21 ಮೌನ ಅನುಷ್ಟಾನದ ಮುಕ್ತಾಯ ಸಮಾರಂಭದಲ್ಲಿ ಅತಿಥಿಗಳಾಗಿ  ಅವರು ಮಾತನಾಡಿದರು. ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಂಭಂದಗಳನ್ನು ಶಾಂತ ಮನಸ್ಸಿನೊಂದಿಗೆ ನೀಭಾಯಿಸುವದನ್ನು ಓ ಶಾಂತಿ ಕೇಂದ್ರಗಳು ಬಹಳ ಸರಳವಾಗಿ ಕಲಿಸುತ್ತವೆ. ಆದ್ಯಾತ್ಮ ಬರಿ ವಯಸ್ಸಾದವರಿಗೆ ಎನ್ನವು ತಪ್ಪು ಕಲ್ಪನೆ ಜನರಲ್ಲಿದ್ದು ಎಲ್ಲರೂ ಆದ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು.  ಪ್ರಾಚರ್ಯ ಎಂ.ವಿ.ಕಟಗೇರಿ ಇವರನ್ನು ಓಶಾಂತಿ ಕೇಂದ್ರದಿಂದ ಸನ್ಮಾನಿಸಲಾಯಿತು.  ಕಾರ್ಯಕ್ರಮದ ದಿವ್ಯ ಸಾನಿದ್ಯ ಇಂಡಿ ಓ ಶಾಂತಿ ಕೇಂದ್ರದ ಯಮುನಾಜಿ ಅಕ್ಕನವರು ಮತ್ತು ಚಡಚಣ ಕೇಂದ್ರದ ಶ್ರೀದೇವಿ ಅಕ್ಕನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಕೇಂದ್ರದ ಸ್ವಯಂಸೇವಕರಾದ ಮಲ್ಲಿನಾಥ ವನಕುದುರೆ, ಎಸ್.ಎನ್ ಸಾಲೋಟಗಿ, ಮಹೇಶ ಕೇಶಟ್ಟಿ, ಎಂ.ಆರ್ ಹಿಟ್ನಳ್ಳಿ, ರಾಜು ಸರಸಂಬಿ, ಅವಟಿ ಸರ್, ಸೇರಿದಂತೆ ನೂರಾರು ಉಪಸ್ಥಿತರ...

ಒಣಕಸ, ಹಸಿಕಸ ವಿಂಗಡಸಿ ವಿಲೇವಾರಿಗೆ ಸಹಕರಿಸಿ

  ಸ್ಫೂರ್ತಿ ನ್ಯೂಸ್ ಚಡಚಣ  ಚಡಚಣ: ಸ್ವಚ್ಚ ಪರಿಸರ ನಿಮರ್ಾಣವನ್ನು ಪ್ರೋತ್ಸಹಿಸುವ ಸಲುವಾಗಿ ಸರಕಾರ 'ಹರಾ ಗೀಲಾ, ಸುಖಾ ನೀಲಾ' ಅಭಿಯಾನದಲ್ಲಿ ಸ್ವಚ್ಚ ಸವರ್ೇಕ್ಷಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಕುರಿತು ವಿಜಯಪುರ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಅವರು ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ ಆದ್ಯತೆ ನೀಡಲಾಗಿದ್ದು, ತ್ಯಾಜ್ಯದಲ್ಲಿ ಒಣ ಕಸ ಹಾಗೂ ಹಸಿ ಕಸ ವಿಂಗಡಣೆ ಮಾಡಬೇಕು. ಸಂಗ್ರಹಣೆಯಾದ ಒಣ ಹಾಗೂ ಹಸಿ ಕಸದ ವಿಂಗಡಣೆ ಮಾಡುವದರಿಂದ ರೋಗ ಹರಡುವಿಕೆ ಪ್ರಮಾಣ ಇಳಿಮುಖ ವಾಗುತ್ತದೆ. ಸ್ವಚ್ಚ ಸುಂದರ ನಗರ ನಿರ್ಮಾಣ ಹಾಗೂ ಸ್ವಚ್ಚತೆ . ಜ ನ ಸಾಮಾನ್ಯರ ಆರೋಗ್ಯ ಹಾಗೂ ಜೀವನ ಮಟ್ಟ ಉತ್ತಮವಾಗಿಸಲು ಸಾಧ್ಯ ಎಂದರು.  ಕಾರ್ಯಪಾಲಕ ಅಭಿಯಂತರರು ಸುರಕೋಡ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಕೆ ತಾವಸೆ ಮಾತನಾಡಿ, ಪಟ್ಟಣ ಸ್ವಚ್ಚತೆಯ ಜೊತೆಗೆ ತಮ್ಮ ಸುತ್ತಲಿನ ಪರಿಸರ ಸ್ವಚ್ಚತೆಯೂ ನಮ್ಮ ನಿಮ್ಮೆಲ್ಲರ ಹೊಣೆ ಎಂದರು.  ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂಧಿ ಹಾಗೂ ಸಾರ್ವಜನಿಕರು ಇದ್ದರು.

ಚಡಚಣ ಯುವ ಬ್ರಿಗೇಡ್ವತಿಯಿಂದ ಹಾವಿನಾಳ ದೇವಾಲಯ ಸ್ವಚ್ಚತೆ..

  ಸ್ಫೂರ್ತಿ ನ್ಯೂಸ್ ಚಡಚಣ  ತಾಲೂಕಿನ ಹಾವಿನಾಳ ಗ್ರಾಮದ ಸುಮಾರು 600 ವರ್ಷಗಳ ಹಳೆಯದಾದ ಪುರಾತನ ಕಲ್ಮೇಶ್ವರ ದೇವಾಲಯ   ದೇವಸ್ಥಾನ ಸ್ವಚ್ಚಗೊಳಿಸುವ ಕಾರ್ಯಚಡಚಣ ಯುವ ಬ್ರಿಗೇಡ್ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ಕೆ ಗ್ರಾಮದ ಕೆಲ ಯುವಕರು ಕೂಡ ಕೈಜೋಡಿಸಿದರು . ದೇವಸ್ಥಾನದ ಪಕ್ಕದ ಮನೆಯ ಸುಮಾರು 70 ವರ್ಷದ ಅಜ್ಜಿಯೂ ಕೂಡ ಯುವಕರ ಜೊತೆಗೆ ಸ್ವಲ್ಪ ಸಮಯ ಸ್ವಚ್ಚತೆಗೆ ಕೈ ಜೋಡಿಸಿದ್ದು ಬಲು ವಿಶೇಷವಾಗಿತ್ತು. ಇದೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಚಹಾ ಮಾಡಿ ಕೊಟ್ಟು ಎಂದು ಹೃದಯಪೂರ್ವಕ ಕಾಳಜಿ ತೋರಿಸಿದರು..  

"ನವ ಸಾನಿಧ್ಯ ಯುವಕರ ದಿನಾಚರಣೆ"

ಸ್ಫೂರ್ತಿ ನ್ಯೂಸ್ ಚಡಚಣ. ನವಸಾನಿಧ್ಯ ಸಂಸ್ಥೆ ಹಾಗೂ ಐನಾಪುರ ತಾಂಡಾದ ಯುವಕ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ದಿನ ಐನಾಪುರ ತಾಂಡಾದಲ್ಲಿ ಆಯೋಜಿಸಲಾಗಿದ್ದ "ನವ ಸಾನಿಧ್ಯ ಯುವಕರ ದಿನಾಚರಣೆ" ಕಾರ್ಯಕ್ರಮದಲ್ಲಿ ನಾಗಠಾಣ ಮತಕ್ಷೇತ್ರದ ಜನಪ್ರಿಯ ಶಾಸಕ.ಡಾ.ದೇವಾನಂದ ಫೂಲಸಿಂಗ ಚವ್ಹಾಣ ರವರು ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಂಡಾದ ನಾಯಕ ಶ್ರೀ.ತಾರಾಸಿಂಗ ನಾಯಕ ರವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ.ಜಯಶ್ರೀ  ಜಾಧವ ರವರು, ಚರ್ಚ್ ನ ಫಾದರ್ ಶ್ರೀ.ಪ್ರಾನ್ಸಿಸ್ ರವರು, ಮುಖಂಡರಾದ ಶ್ರೀ.ಮಹೇಂದ್ರ ನಾಯಕ ರವರು, ಶ್ರೀ.ಮುತ್ತುಗೌಡ ಗೊಬ್ಬೂರ ರವರು, ತಾಂಡಾದ ಪ್ರಮುಖರಾದ ಶ್ರೀ.ಕಿರಣ ರಾಠೋಡ ರವರು, ಶ್ರೀ.ವೀರಚಂದ್ರ ಪೂಜಾರಿ ರವರು, ಶ್ರೀ.ಮಹಾದೇವ ರಾಠೋಡ ರವರು, ಶ್ರೀ.ಧನಸಿಂಗ ಕಾರಬಾರಿ ರವರು, ಶ್ರೀ.ಗಣಪತಿ ಜಾಧವ ರವರು, ಶ್ರೀಮತಿ.ಭಾರತಿ ನಾಯಕ ರವರು, ಶ್ರೀಮತಿ.ಗೌರಿಬಾಯಿ ರವರು, ಶ್ರೀಮತಿ.ಸುಮಿತ್ರಾ ಪೂಜಾರಿ ರವರು, ಶ್ರೀಮತಿ.ಜ್ಯೋತಿ ರವರು, ಶ್ರೀ.ರಮೇಶ ರಾಠೋಡ ರವರು, ಶ್ರೀ.ನಾಮದೇವ ರಾಠೋಡ ರವರು, ಶ್ರೀ.ದೋಂಡಿರಾಮ ರಾಠೋಡ ರವರು, ಶ್ರೀ.ಕೈಲಾಸ ನಾಯಕ ರವರು, ಶ್ರೀ.ಧನಸಿಂಗ ಕಾರಬಾರಿ ರವರು, ಶ್ರೀ.ಹೀರು ಚವ್ಹಾಣ ರವರು, ಪಿ.ಡಿ.ಒ. ಧನಸಿಂಗ ರಾಠೋಡ ರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಖೋ ಖೋ : ವಿಭಾಗೀಯ ಮಟ್ಟಕ್ಕೆ ಆಯ್ಕೆ

  ಸ್ಫೂರ್ತಿ ನ್ಯೂಸ್ ಚಡಚಣ. ತಾಲೂಕಿನ ಬತಗುಣಕಿ ಗ್ರಾಮದ ಎಸ್ ಎ ಮಿಸಾಳೆ    ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕಿ ಎಸ್ ಎಸ್ ದಶವಂತ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ ಎಮ್ ಕೋರೆ ಶಿಕ್ಷಕರಾದ ಎಸ್ ಎಸ್ ಸೊನಗಿ, ಎಂ ಪಿ ಅಮಿನಗಡ, ಎಸ್ ಎಚ್ ಬಾಗವಾನ, ಎ ಎ ಬಿರಾದಾರ,  ಆರ್ ಜೆ ಇಮೂಗೋಳ ಹಾಗೂ ದೈಹಿಕ ಶಿಕ್ಷಕರಾದ  ಆರ್ ಎಸ್ ಬಿರಾದಾರ ಮತ್ತು  ಆರ್ ಎಸ್ ಬಾಬರ, ಊರಿನ ನಾಗರಿಕರು ಅಭಿನಂದಿಸಿ ಹಾಗೂ ಹರ್ಷ ವ್ಯಕಪಡಿಸಿದ್ದಾರೆ.

ಜನರ ಪ್ರೀತಿಗೆ ಚಿರಋಣಿ. ನಾಗಠಾಣ ಮತಕ್ಷೇತ್ರದ ಜನತೆಯ ಸೇವೆಗೆ ಮರಳುವೆ : ಗೋಪಾಲ ಕಾರಜೋಳ

  ಸ್ಫೂರ್ತಿ ನ್ಯೂಸ್ ಚಡಚಣ .   ನಾಗಠಾಣ ಮತಕ್ಷೇತ್ರದ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು  ಪಟ್ಟಣದ ಅವಟಿ ಮಂಗಲ ಕಾರ್ಯಾಲಯದಲ್ಲಿ  ಚಡಚಣ ಮಂಡಲದ ವತಿಯಿಂದ ಆಯೋಜಿಸಲಾದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರ ಸೇವೆ ಮಾಡುವುದೆ ನನ್ನ ಗುರಿ ನಿಮ್ಮ ಪ್ರೀತಿ ವಿಶ್ವಾಸ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದರು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಾಗೌಡ ಬಿರಾದಾರ,ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಜು ಝಳಕಿ ಮಾತನಾಡಿದರು. ಮಂಡಲ ಅಧ್ಯಕ್ಷ ರಾಮ ಅವಟಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇದ್ದರು

ಕೇಂದ್ರ ಸರಕಾರ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಖಂಡಿಸಿ ತಹಸೀಲ್ದಾರ್ ಗೆ ಮನವಿ.

ಸ್ಫೂರ್ತಿ ನ್ಯೂಸ್  ಚಡಚಣ. ಕೇಂದ್ರ ಸರ್ಕಾರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರರ ನೇಮಕಾತಿಯಲ್ಲಿ ಕನ್ನಡಿಗರ ಆದ ಅನ್ಯಾಯ ಖಂಡಿಸಿ ತಹಶೀಲ್ದಾರ್ ಹನಮಂತ ಶಿರಹಟ್ಟಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ   ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಮಂಗಳವಾರ ಸಲ್ಲಿಸಿದರು. ಈ ಸಂದರ್ಭದಲ್ಲಿ  ಕರವೇ ಮುಖಂಡ ಮಹಾದೇವ ಬನಸೋಡೆ ಮಾತನಾಡಿ, ಕೇಂದ್ರ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000ಕ್ಕೂ ಹೆಚ್ಚಿನ ’ಬಿ’ ಮತ್ತು ’ಸಿ’ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲಾ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವಂಥಾ ತಾರತಮ್ಯದ ನಡೆಯಾಗಿದೆ. ನೇಮಕಾತಿಯ ಎಲ್ಲಾ ಹಂತದ ಪರೀಕ್ಷೆಗಳೂ ಹಿಂದೀ/ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ನಡೆಸುವುದು ಕನ್ನಡಕ್ಕೆ ಮಾಡಿದ ಅನ್ಯಾಯ.  ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತraದ ಶಕೀಲ ಖಾಟಿಕ, ಶೂಕುರ ಕೊರ್ತಿ, ಹುಮಾ ಯನ ಪಟೇಲ, ಅಖಿಲ ಅರ್ಜುನಗಿ, ಜಿಲಾನಿ ವಾಲಿಕಾರ, ಜಟ್ಟೆಪ್ಪ ಬನಸೋಡೆ, ಸಂದೇಶ ಬನಸೋಡೆ, ಸುಭಾಸ ಬನಸೋಡೆ, ಈರಣ್ಣ ಪಾಟೀಲ ಇದ್ದರು.

ನರೂಣಿ ಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ.

  ಸ್ಫೂರ್ತಿ ನ್ಯೂಸ್ ಚಡಚಣ. ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ  ಈರಣ್ಣ ಎಸ್ ನರೂಣಿ ಅವರಿಗೆ ಜಿಲ್ಲಾ ಯುವ ಪರಿಷತ್ತು ಮತ್ತು ಓದುಗರ ಚಾವಡಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ  ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರಧಾನ ಮಾಡಲಾಯಿತು.  ವಿಜಯಪುರದ  ಕಂದಗಲ್ ರಂಗಮಂದಿರದಲ್ಲಿ ಓದುಗರ ಚಾವಡಿ  ಹಾಗೂ ಜಿಲ್ಲಾ ಯುವ ಪರಿಷತ್ತಿನ ಸಹಯೋಗದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ ಎಂ ಎಸ್ ಮಾಗಣಗೇರಿ, ಬೆಂಗಳೂರಿನ ಮಕ್ಕಳ ಹಕ್ಕುಗಳ ಜಾಗತಿಕ ರಾಯಭಾರಿ ಡಾ.ವನಿತಾ ತೊರವಿ ಬಿ. ಆರ್. ಬನಸೋಡೆ ಇದ್ದರು. ನರೂಣಿ ಯವರ ಸಾಧನೆಗೆ ನಿವರಗಿ ಗ್ರಾಮಸ್ಥರು ಅಭಿನಂದನೆಗಳು ತಿಳಿಸಿದ್ದಾರೆ.

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ದೇವಾನಂದ ಚವ್ಹಾಣ ಭೂಮಿ ಪೂಜೆ

 ಸ್ಫೂರ್ತಿ ನ್ಯೂಸ್ನಾ ಚಡಚಣ. ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂಬರ್.15 ರ ನಾಗೇಶ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯ 5054 ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ರೂ.35.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಜನಪ್ರಿಯ ಶಾಸಕ ಡಾ.ದೇವಾನಂದ ಫೂಲಸಿಂಗ ಚವ್ಹಾಣ ರವರು ಈ ದಿನ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಾಗೇಶ ಕಾಲೋನಿಯ ಮುಖಂಡರು, ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಶಾಸಕರ ಜನ್ಮದಿನ : ರಕ್ತದಾನ ಶಿಬಿರ ಆಯೋಜಿಸಿದ ಅಭಿಮಾನಿ ಬಳಗ.

  ಸ್ಫೂರ್ತಿ ನ್ಯೂಸ್ ಚಡಚಣ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಶಾಸಕ ಯಶವಂತರಾಯಗೌಡ ವ ಪಾಟೀಲ ರವರ 55ನೇ ಜನ್ಮದಿನದ ನಿಮಿತ್ತವಾಗಿ ಬ್ರಹತ್ ರಕ್ತದಾನ ಶಿಬಿರವನ್ನು ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಜನಸೇವಕ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಬಿ ಎಲ್ ಡಿ ಇ ಆಸ್ಪತ್ರೆ ರಕ್ತಭಂಡಾರ ವಿಭಾಗದ ಸಿಬ್ಬಂದಿ ರಾಜಶೇಖರ ಚಿನವಾರ ಮಾತನಾಡಿ ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದಂತಾಗುತ್ತದೆˌ ಥೆಲಾಸೀಮಿಯಾ ಅಂತಹ ರೋಗಿಗಳು ನಿಮ್ಮನ್ನೆ ಅವಲಂಬಿಸಿರುತ್ತಾರೆ ಬಬಲಾದ ಗ್ರಾಮವು ವಿಜಯಪುರ ಜಿಲ್ಲೆಗೆ ರಕ್ತದಾನ ಮಾಡಲು ಹೆಸರುವಾಸಿಯಾಗಿದೆ ಮತ್ತು ಎಲ್ಲರಿಗೂ ಪ್ರೇರಣೆ ಆಗಿದೆ. ಈ ಗ್ರಾಮದ ರಕ್ತದಾನಿಗಳು ಜೀವದಾನಿಗಳು ಅಂತ ತಿಳಿಸಿದರು. ಪ್ರೀತು ದಶವಂತ ಮಾತನಾಡಿ,  ರಕ್ತದಾನವು ಜೀವ ಉಳಿಸುವ ಪ್ರಕ್ರಿಯೆ ಆಗಿರುವುದರಿಂದ ಇದನ್ನು ರಕ್ತದಾನ ಜೀವದಾನ ಅನ್ನುವರುˌ ಇದಕ್ಕೆ ಬದಲಿ ಸಂಯೋಜನೆ ಇಲ್ಲ ವಿಜ್ಞಾನ ತಂತ್ರಂಜ್ಞಾನ ಎಷ್ಟೇ  ಮುಂದುವರಿದರು ಇದನ್ನು ಕೃತಕವಾಗಿ ತಯಾರಿಸಲು ಸಾದ್ಯವಾಗಿಲ್ಲ.ˌ ರಕ್ತದಾನ ಮಾಡುವ ಮೂಲಕ ಮಾತ್ರ ಇದು ಸಾದ್ಯ. ಸತತವಾಗಿ ಶಾಸಕರ ಜನ್ಮದಿನದ ನಿಮಿತ್ತವಾಗಿ ಈವರೆಗೂ ಬಬಲಾದ ಗ್ರಾಮದಲ್ಲಿ 9ನೇ ಬಾರಿ ರಕ್ತದಾನ  ಮಾಡಲಾಗಿದೆ . ಮುಂದೆವು ಕೂಡ ನಡೆಸಲಾಗುವುದು ಅಂತ ತಿಳಿಸಿದರು. ಹೊರ್ತಿ ಪಿಕೆಪಿಎಸ್ ಸಿಇಒ ಅಣ್ಣಾರಾಯ ಬಾ ಪೂಜಾರಿ  ಮಾತನಾಡಿ, ಪ್ರೀತು ದಶವಂತ ಜನಸೇವಕ ಬಳಗ ...

ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಕಂಪ್ಯೂಟರ್ ದೇಣಿಗೆ.

  ಸ್ಫೂರ್ತಿ ನ್ಯೂಸ್ ಚಡಚಣ.  ಗುಂಭಜ ಎಕ್ಸಪ್ರೆಸ್ ದಿನಪತ್ರಿಕೆಯಲ್ಲಿ ಸಂಪಾದಕಿ ಕೌಶಲ್ಯ ಪನಾಳಕರ ಅವರ ಜನ್ಮದಿನದ ನಿಮಿತ್ಯ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅದ್ಯಾಕ್ಷರಾದ ಸಂಗಮೇಶ ಚೂರಿ ಅವರಿಗೆ ಕಂಪ್ಯೂಟರ್ ದೇಣಿಗೆಯಾಗಿ ಸೋಮವಾರ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಂದುಶೇಖರ ಮಣುರ, ಫಿರೋಜ್ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಶಾಕಿಲ ಬಾಗಮಾರೆ, ಖಜಾಂಚಿ ರಾಹುಲ ಆಪಟೆ, ರಾಜ್ಯ ಕಾರ್ಯಕಾರಿಣಿ ಡಿ ಬಿ ವಡವಡಗಿ, ಕೆ ಕೆ ಕುಲಕರ್ಣಿ ಸೇರಿದಂತೆ  ಪತ್ರಕರ್ತರು ಇದ್ದರು.

108 ಸಿಬ್ಬಂದಿಯಿಂದ ಹಸಗುಸು ರಕ್ಷಣೆ: ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪುರ

 ಸ್ಫೂರ್ತಿ ನ್ಯೂಸ್ ಚಡಚಣ. ತಾಲೂಕಿನ ಗುಂದವಾನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಸಾಕಿದ ನವಜಾತ ಶಿಶು (ಗಂಡು ಮಗು) ವನ್ನು ಝಳಕಿ ಗ್ರಾಮದ 108ಆಂಬುಲೆನ್ಸ್ಸಿನ ಸಿಬ್ಬಂದಿ ದಾನೇಶ ಹಿರೆಮಠ ಹಾಗೂ ಚಾಲಕ ಭಾವುರಾಜ ಮಂಗಳವೇಡೆ ಅವರು ರಕ್ಷಣೆ  ಮಾಡಿ ಅರೋಗ್ಯ ಇಲಾಖೆಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ  ಭಾನುವಾರ ಗುಂದವಾನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮದ್ಯಾಹ್ನ ಎರಡು ಗಂಟೆಗೆ ಮಗು ಅಳುತ್ತಿರುವ ಸುದ್ದಿ ತಿಳಿದು 108 ಯಾಂಬುಲೆನ್ಸ ಸಿಬ್ಬಂದಿ ಸರಿಯಾದ ಸಮಯಕ್ಕೆ ತಲುಪಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ತಂದು ಝಳಕಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗುವಿನ ರಕ್ಷಣಾ ಕಾರ್ಯಕ್ಕೆ ಇಲ್ಲಿನ ನಾಗರಿಕರು, ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಭಿನಂದಿಸಿದೆ.

ಸಿದ್ದೇಶ್ವರ ಶ್ರೀಗಳ ಆದ್ಯಾತ್ಮಿಕ ಪ್ರವಚನ ನಾಳೆ (ಆ.12)

ಸ್ಫೂರ್ತಿ ನ್ಯೂಸ್ ಚಡಚಣ. ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದ ಗುರುದೇವಶ್ರಮದಲ್ಲಿ ಆ.12 ರಂದು ಬೆಳಿಗ್ಗೆ 6.30ರಿಂದ 7.30 ರ ವರೆಗೆ ವಿಜಯಪುರದ ಜ್ಞಾನಯೋಗಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರಿಂದ ಆದ್ಯಾತ್ಮಿಕ ಪ್ರವಚನ ಜರುಗಲಿದೆ ಎಂದು ಆದ್ಯಾತ್ಮಿಕ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಷನಲ್ ಅವಾರ್ಡ್ ಕಾಂಬಳೆ ಆಯ್ಕೆ

  ಸ್ಫೂರ್ತಿ ನ್ಯೂಸ್ ಚಡಚಣ. ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಳ್ಳಿ ಮುಖ್ಯ ಶಿಕ್ಷಕ ಹಾಗೂ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಎಸ್. ಕಾಂಬಳೆ ಅವರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅವರು ಕೊಡಮಾಡುವ 2022 ನೇ ಸಾಲಿನ ಡಾ. ಬಿ.ಆರ್.ಅಂಬೇಡ್ಕರ್ ಫೆಲೋಷಿಪ್ ನ್ಯಾಷನಲ್ ಅವಾರ್ಡಗೆ ಆಯ್ಕೆಯಾಗಿದ್ದಾರೆ ಎಂದು ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಅಧ್ಯಕ್ಷ ಎಸ್ ಪಿ ಸುಮನಸ್ಕೆರ ಆದೇಶದಲ್ಲಿ ತಿಳಿಸಿದ್ದಾರೆ. ಈ ಪ್ರಶಸ್ತಿಯು ಡಿಸೆಂಬರ್ 11 ರಂದು ದೆಹಲಿಯಲ್ಲಿ ನಡೆಯಲಿರುವ 38ನೇ ದಲಿತ ಸಾಹಿತ್ಯ ಅಕಾಡೆಮಿಯ ನ್ಯಾಷನಲ್ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು  ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಸಮಾವೇಶ ಅ.11ರಂದು.

  ಸ್ಫೂರ್ತಿ ನ್ಯೂಸ್ ಚಡಚಣ . ಚಡಚಣ ಟ್ಟಣದ ಅವಟಿ ಮಂಗಲ ಕಾರ್ಯಾಲಯದಲ್ಲಿ ಆಗಷ್ಟ 11 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಜಾರುಗಲಿದೆ ಎಂದು ಮಂಡಲ ಅಧ್ಯಕ್ಷ ರಾಮ ಅವಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ ಯುವ ಮುಖಂಡರಾದ ಡಾ ಗೋಪಾಲ ಅಣ್ಣಾ ಕಾರಜೋಳ ಅವರು  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಅಭಿಮಾನಿ ಬಂಧುಗಳು ಮತದಾರ ಬಂಧುಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಿಕೊಂಡಿದ್ದಾರೆ

ಛದ್ಮ ವೇಷ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸ್ಫೂರ್ತಿ ನ್ಯೂಸ್ ಚಡಚಣ.  ತಾಲೂಕಿನ ಶಿರಾಡೂಣ  ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ನಿವರಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ದಿವ್ಯಾ  ಸಾಲಿಮಠ  "ಪ್ರಥಮ ಸ್ಥಾನ" ಪಡೆದಿಯುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ, ಪಾಲಕರು,ಶಾಲಾ ಎಸ್‌.ಡಿ.ಎಂ.ಸಿ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಮತಕ್ಷೇತ್ರದ ಅಭಿವೃದ್ಧಿ ಗೆ ಬದ್ದ ಶಾಸಕ ದೇವಾನಂದ

  ಸ್ಫೂರ್ತಿ ನ್ಯೂಸ್ ಚಡಚಣ.  ನಾಗಠಾಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ಬದ್ಧನಾಗಿರುವುದಾಗಿ ಶಾಸಕ ದೇವಾನಂದ ಚವ್ಹಾಣ ಹೇಳಿದರು. ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂ.15 ರಲ್ಲಿ ಬರುವ ಶಿಖ್ ಕಾಲೋನಿಯ ಜರ್ಮನ್ ಪ್ಯಾಕ್ಟರಿ ಹತ್ತಿರ ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಲೆಕ್ಕ ಶೀರ್ಷಿಕೆ (ಎಸ್.ಡಿ.ಪಿ - ಎಸ್.ಸಿ.ಪಿ.) ಯೋಜನೆಯಡಿಯಲ್ಲಿ ರೂ.10.00 ಲಕ್ಷಗಳ ಅನುದಾನದಲ್ಲಿ  ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.  ಈ ಸಂದರ್ಭದಲ್ಲಿ ಶಿಖ್ ಕಾಲೋನಿ,  ಕೃಷ್ಣ ನಗರ, ಆದಿಲ್ ಶಾಹಿ ನಗರ, ಶಾಹಿನಷಾ ನಗರ, ಯೋಗಾಪುರ ಕಾಲೋನಿಯ ಮುಖಂಡರು, ಹಿರಿಯರು,ಯುವ ಮುಖಂಡರು, ಕಾರ್ಯಕರ್ತರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ದೇವಾನಂದ ಚಾಲನೆ

ಸಿಸಿ ರಸ್ತೆ ಕಾಮಗಾರಿಗೆ ಶಾಸಕ ದೇವಾನಂದ ಚಾಲನೆ  ಸ್ಫೂರ್ತಿ ನ್ಯೂಸ್ ಚಡಚಣ. ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂಬರ್.12 ರ ವಸ್ತ್ರದ ಕಾಲೋನಿಯಲ್ಲಿ ಮಹಾನಗರ ಪಾಲಿಕೆ ನಿಧಿ ಯೋಜನೆಯಡಿ ಮಂಜೂರಾದ ರೂ.11.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿ.ಸಿ ರಸ್ತೆ ಹಾಗೂ ಪೈಪ್ ಸಿ.ಡಿ ನಿರ್ಮಾಣ ಕಾಮಗಾರಿಗೆ ಜನಪ್ರಿಯ ಶಾಸಕದೇವಾನಂದ ಫೂಲಸಿಂಗ ಚವ್ಹಾಣ ರವರು ಈ ದಿನ ಭೂಮಿ ಪೂಜೆ ನೆರವೇರಿಸಿದರು . ಈ ಸಂದರ್ಭದಲ್ಲಿ ವಸ್ತ್ರದ ಕಾಲೋನಿ, ಕಾರ್ಗಿಲ್ ನಗರ, ಅಕ್ಕಿ ಕಾಲೋನಿಗಳ ಮುಖಂಡರು, ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಒಳ ಚರಂಡಿ ಕಾಮಗಾರಿಗೆ ಶಾಸಕ ದೇವಾನಂದ ಚವ್ಹಾಣ ಅವರಿಂದ ಚಾಲನೆ

ಒಳ ಚರಂಡಿ ಕಾಮಗಾರಿಗೆ ಶಾಸಕ ದೇವಾನಂದ ಚವ್ಹಾಣ ಅವರಿಂದ ಚಾಲನೆ ಸ್ಫೂರ್ತಿ ನ್ಯೂಸ್ ಚಡಚಣ.  ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂಬರ್.12 ರ ಕಾಳಿಕಾ ನಗರದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರಾದ ರೂ.35.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಜನಪ್ರಿಯ ಶಾಸಕ.ದೇವಾನಂದ ಫೂಲಸಿಂಗ ಚವ್ಹಾಣ ರವರು ಈ ದಿನ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಳಿಕಾ ನಗರ,  ಕಾರ್ಗಿಲ್ ನಗರ, ಲಕ್ಷ್ಮಿ ನಗರ ಗಳ  ಮುಖಂಡರು, ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಚಡಚಣ : ವಾಲ್ಮೀಕಿ ಜಯಂತಿ

 ಚಡಚಣದ  ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿಯನ್ನು  ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಕನ್ನಡದ ಪ್ರಾಧ್ಯಾಪಕ ಪ್ರೊ . ಆರ್‌ ಪಿ ಬಗಲಿ ಅವರು ಮಾತನಾಡಿ, ಮಾನವಿಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಆದಿಕವಿ ಮಹರ್ಷಿ ವಾಲ್ಮೀಕಿ ,ಮಾನವ ಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.  ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಪ್ರಾಚಾರ್ಯಡಾ. ಎಸ್ ಬಿ ರಾಠೋಡ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಿದ್ಧಾಂತ ತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ . S F ಬಿರಾದಾರ,   ಪ್ರೊ. B S ಪವಾರ, ಡಾ. ಎಸ್ ಎಸ್ ದೇಸಾಯಿ, ಶ್ರೀ ಎಸ್ ಎಸ್  ಅವಟಿ , ಆಳಗೊಂಡ ಪಾಟೀಲ ಅವರು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.